ಪುಸ್ತಕ ಪರಿಚಯ: ಮಹತ್ವಾಕಾಂಕ್ಷೆ
ಪುಸ್ತಕ ಪರಿಚಯ: ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆ
ಪುಸ್ತಕ ಪರಿಚಯ: ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆ
ಕಾದಂಬರಿಯಾದರೆ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ಉಸಿರಿಗೆ ಓದಬಹುದು. ಪುಟ್ಟಪುಟ್ಟ ಲೇಖನಗಳಿಗರುವ ಪುಸ್ತಕಗಳನ್ನು ಒಂದೇ ಸಾರಿ ಓದಿ ಮುಗಿಸಬೇಕಿಲ್ಲ. ಒಂದೊಂದು ಲೇಖನ ಓದಿ ವಿರಮಿಸಿ ಮತ್ತೆ ಮುಂದಿನ ಲೇಖನ ಓದಬಹುದು. ನಾನು ಇತ್ತೀಚೆಗೆ ಒಂದೇ ಬಾರಿ ಎರಡು ಕನ್ನಡ ಪುಸ್ತಕಗಳನ್ನು ಖರೀದಿಸಿದೆ. ಸುಧಾಮೂರ್ತಿಯವರ “ಸಾಫ್ಟ್ ಮನ” ಮತ್ತು ಪರಶಿವಪ್ಪ ಅವರ “ಮಹತ್ವಾಕಾಂಕ್ಷೆ”. ಶೀರ್ಷಿಕೆ ಬೇರೆಬೇರೆಯಾಗಿ ಕಂಡರೂ ಎರಡೂ ಪುಸ್ತಕಗಳೂ ಬದುಕಿನ ಕತೆಗಳನ್ನೇ ಹೇಳಿ ಸ್ಫೂರ್ತಿ ತುಂಬುವಂತದ್ದು. ನಾನು ಈ ಎರಡು ಪುಸ್ತಕಗಳನ್ನೂ ಒಟ್ಟಿಗೆ ಓದಿದೆ! ಅಂದರೆ, ಸಾಫ್ಟ್ ಮನದ ಕೆಲವು… Read More »
ಇತ್ತೀಚೆಗೆ ನಾನು ಓದಿ ಮುಗಿಸಿದ ಪುಸ್ತಕ ಎಸ್.ಎನ್. ಸೇತುರಾಮ್ ರಚಿಸಿದ “ನಾವಲ್ಲ” ಎಂಬ ಕಥಾ ಸಂಕಲನ. ದೊಡ್ಡ ಪುಸ್ತಕವನ್ನು ಒಂದೆರಡೇ ದಿನದಲ್ಲಿ ಓದಿ ಮುಗಿಸುವ ನನಗೆ ಈ ಆರು ಕತೆಗಳ ಪುಸ್ತಕವನ್ನು ಓದಿ ಮುಗಿಸಲು ಭರ್ತಿ ಆರು ದಿನ ಬೇಕಾಯಿತು. ತಡವಾಗಿರುವುದಕ್ಕೆ ಕಾರಣ “ಇದರಲ್ಲಿರುವ ಒಂದೊಂದು ಕತೆಯೂ ಮನಸ್ಸಿನ ಮೇಲೆ ಬೀರುವ ಪರಿಣಾಮ, ಚಿಂತನೆಗೆ ಹಚ್ಚುವ ಪರಿ, ಮೂಡಿಸುವ ಭಾವ ಇತ್ಯಾದಿಗಳು”. ನಾನು ಓದಿದ ಅತ್ಯುತ್ತಮ ಕಥಸಂಕಲನವಿದು. ಸೇತುರಾಮ್ ನಾಟಕಗಳು ನನಗಿಷ್ಟ. ಅವರ “ಅತೀತ” ನಾಟಕವನ್ನು ರಂಗಶಂಕರದಲ್ಲಿ ನೋಡಿದ್ದೆ. ಕೆಲವೇ ಪಾತ್ರಗಳಾದರೂ… Read More »
ಕನ್ನಡ ಪುಸ್ತಕ ಖರೀದಿಸಲು ಇರುವ ಆನ್ಲೈನ್ ಅಂಗಡಿಗಳ ಕುರಿತು ಮಾಹಿತಿ ನೀಡುವ ಈ ಲೇಖನಕ್ಕೆ ಸಾಕಷ್ಟು ಜನರು ಗೂಗಲ್ ಹುಡುಕಾಟದ ಮೂಲಕ ಬರುತ್ತಿದ್ದಾರೆ. ಕನ್ನಡ ಪುಸ್ತಕದ ಕುರಿತು ಹೆಚ್ಚು ಜನರು ಹುಡುಕುತ್ತಿದ್ದಾರೆ ಎನ್ನುವುದು ಖುಷಿಯ ಸಂಗತಿ. ಇಲ್ಲಿ ಯಾವುದಾದರೂ ಹೊಸ ಪುಸ್ತಕದ ಶಾಪ್ ಕುರಿತು ಮಾಹಿತಿ ನೀಡಲು ಬಯಸುವವರು ಕಾಮೆಂಟ್ನಲ್ಲಿತಿಳಿಸಬಹುದು. ಪುಸ್ತಕದಂಗಡಿಗೆ ಹೋಗಲು ಸಮಯದ ಲಭ್ಯತೆ ಇಲ್ಲದವರಿಗೆ ಆನ್ ಲೈನ್ ಪುಸ್ತಕದಂಗಡಿಗಳು ಆಸರೆಯಾಗಬಲ್ಲವು. ಇಂಗ್ಲಿಷ್ ಭಾಷೆಯ ಪುಸ್ತಕದಂಗಡಿಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇ-ಪುಸ್ತಕ ತಾಣಗಳು ಕಡಿಮೆ ಇಲ್ಲವೆಂದು ಹೇಳುವಂತೆ ಇಲ್ಲ. ಯಾಕೆಂದರೆ, ಕನ್ನಡ ಪುಸ್ತಕ… Read More »