ಮಹಾಭಾರತದಿಂದ ಉದ್ಯೋಗಿಗಳು ಏನು ಕಲಿಯಬಹುದು?
ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸುತ್ತಿರುವಾಗ ಮಹಾಭಾರತ ಮತ್ತು ಮ್ಯಾನೇಜ್ಮೆಂಟ್ ಪಾಠಗಳ ಕುರಿತು ಒಂದು ಪುಟ್ಟ ಲೇಖನ ದೊರಕಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನವನ್ನು ವಿಸ್ತರಿಸಿ ಬರೆಯಲಾಗಿದೆ ಮತ್ತು ಒಂದಿಷ್ಟು ಹೊಸ ವಿಷಯಗಳನ್ನು ಸೇರಿಸಲಾಗಿದೆ. ಭಾರತದ ಧಾರ್ಮಿಕ, ತಾತ್ವಿಕ, ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದಾಗಿರುವ ಮಹಾಭಾರತದಲ್ಲಿ ಹಲವು ಪಾಠಗಳು ಅಡಗಿವೆ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವವರು ಮಹಾಭಾರತ ಬೋಧಿಸುವ ತತ್ವಗಳನ್ನು `ಕರಿಯರ್ ಪಾಠ’ವಾಗಿ ಸ್ವೀಕರಿಸಬಹುದು. ಗಮನ ಕೇಂದ್ರಿಕರಿಸಿದರೆ ಯಶಸ್ಸು ಗುರು ದ್ರೋಣಾಚಾರ್ಯರಿಂದ ಪಾಂಡವರು ಮತ್ತು ಕೌರವವರು ಅಸ್ತ್ರ ವಿದ್ಯೆ ಅಥವಾ ಬಿಲ್ವಿದ್ಯೆ ಕಲಿಯುತ್ತಿರುತ್ತಾರೆ.… Read More »