ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯ ಬಾಗಲಕೋಟೆ ಇಲ್ಲಿ ಗುತ್ತಿಗೆ ಆಧಾರದಲ್ಲಿ ಆಯುಷ್ ತಜ್ಞ ವೈದ್ಯರು/ ಔಷಧಿ ವಿತರಕರು/ ಮಸಾಜಿಸ್ಟ್/ ಕ್ಷಾರಸೂತ್ರ ಅಟೆಂಡರ್/ ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಹಿಂಪಡೆಯಲಾಗಿದೆ.
ಆಯುಷ್ ತಜ್ಞ ವೈದ್ಯರು/ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಹುದ್ದೆಗೆ ತಕ್ಕಂತೆ ನಿಯಮಾನುಸಾರ ಅಗತ್ಯ ವಿದ್ಯಾರ್ಹತೆ, ಮೀಸಲಾತಿ, ಗುತ್ತಿಗೆ ಷರತ್ತುಗಳ ಅನ್ವಯ ನೇಮಕಾತಿಗಾಗಿ ಸೂಕ್ತ ಅಭ್ಯರ್ಥಿಗಳಿಂದ ದಿನಾಂಕ 27-08-2021 ರಂದು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ದಿನಾಂಕ : 30-08-3021 ರಿಂದ 17-09-2021 ರವರೆಗೆ ಅರ್ಜಿ ಆಹ್ವಾನಿಸಲಾಗಿತ್ತು.
ದಿನಾಂಕ 17.11.2021 ರಂದು ಜರುಗಿದ ನೇಮಕಾತಿ ಆಯ್ಕೆ ಸಮಿತಿ ಸಭೆಯಲ್ಲಿ ದಿನಾಂಕ 27-08-2021 ರಂದು ಹೊರಡಿಸಿದ ಅಧಿಸೂಚನೆಯನ್ನು ರದ್ದುಗೊಳಿಸುವುದು ಸೂಕ್ತವೆಂದು ಆಯುಷ್ ಆಯ್ಕೆ ಸಮಿತಿ ನಿರ್ಧರಿಸಿದೆ.