Category Archives: success

Personality development: ಜೇಮ್ಸ್ ಬಾಂಡ್ ಜೀವನ ಪಾಠ

By | 10/12/2018

ಹಾಲಿವುಡ್‍ನ ಜನಪ್ರಿಯ ಪತ್ತೆದಾರಿ ಪಾತ್ರವಾದ ಜೇಮ್ಸ್ ಬಾಂಡ್‍ನಿಂದ ಬದುಕಿನಲ್ಲಿ ಕಲಿಯಬೇಕಾದ ಸಾಕಷ್ಟು ಪಾಠಗಳಿವೆ. ಈ ಪಾಠಗಳು ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲು ನೆರವಾಗಬಹುದು. * ಪ್ರವೀಣ್ ಚಂದ್ರ ಪುತ್ತೂರು ಜಗತ್ತಿನ ಜನಪ್ರಿಯ ಕಾಲ್ಪನಿಕ ಪತ್ತೆದಾರಿ ಪಾತ್ರವಾದ ಜೇಮ್ಸ್ ಬಾಂಡ್ ಎಲ್ಲರಿಗೂ ಅಚ್ಚುಮೆಚ್ಚು. ನೀವೂ ಜೇಮ್ಸ್ ಬಾಂಡ್ ಸಿನಿಮಾಗಳನ್ನು ನೋಡಿರಬಹುದು. ಜೇಮ್ಸ್ ಬಾಂಡ್‍ನ ಚಾಣಾಕ್ಷ್ಯತನಕ್ಕೆ, ಸಾಹಸಕ್ಕೆ ವಾಹ್ ಎಂದಿರಬಹುದು. ನಾನೂ ಅವನಂತಾಗಬೇಕು ಎಂದು ಕನಸು ಕಂಡಿರಲೂಬಹುದು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಮ್ಮ ಕರಿಯರ್ ಪ್ರಗತಿಗೆ ನೆರವಾಗುವ ಹಲವು ಅಂಶಗಳನ್ನು ಗುರುತಿಸಿದ್ದೀರಾ? ಎಂತಹ ಪರಿಸ್ಥಿತಿ ಬಂದರೂ… Read More »

Big Dreams: 20 ಕೋಟಿ ಸಿಕ್ಕರೆ ಏನು ಮಾಡ್ತಿರಿ?

By | 05/12/2018

ನಿಮಗೆ ಅಂದಾಜು 20 ಕೋಟಿ ರೂಪಾಯಿ ನೀಡಿದರೆ ಏನು ಮಾಡುವಿರಿ? ಇಂತಹ ಪ್ರಶ್ನೆ ನನ್ನಲ್ಲಿ ಕೇಳಿದರೆ “ಬೆಂಗಳೂರಿನಲ್ಲಿ ಒಂದು ಸೈಟ್ ಅಥವಾ ಅಪಾರ್ಟ್ ಮೆಂಟ್”(ಬಾಡಿಗೆ ಕೊಟ್ಟು ಸಾಕಾಗಿದೆ), ಊರಲ್ಲಿ ಒಂದು ಆಸ್ತಿ ಖರೀದಿ… ಒಂದು ಒಳ್ಳೆಯ ಕಾರು… ಹೀಗೆ ಒಂದಿಷ್ಟು ಕನಸುಗಳನ್ನು ಬಿಚ್ಚಿಡುತ್ತಿದ್ದೆ. ಬಹುತೇಕರಿಗೆ ಇದೇ ರೀತಿ ಕನಸು ಇರಬಹುದು. ಹಣ ಕೊಡ್ತಿನಿ ಎಂದು ಯಾರು ಪ್ರಶ್ನೆ ಕೇಳುತ್ತಾರೆ? ಇಂತಹ ಪ್ರಶ್ನೆಯನ್ನು ಯಾರಾದರೂ ಕೇಳುತ್ತಾರ? ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನಿಜಕ್ಕೂ ಇಂತಹ ಪ್ರಶ್ನೆ ಕೇಳಲಾಗಿತ್ತು… ಸಾವಿರಾರು ಜನರು ಈ ಪ್ರಶ್ನೆಗೆ… Read More »

Moral Story: ಡೇವಿಡ್ ಮತ್ತು ಗೋಲಿಯಾಥ್ (ಸಂಗ್ರಹ)

By | 03/12/2018

ಶಿವ್ ಖೇರಾ ಬರೆದ “ಯು ಕ್ಯಾನ್ ವಿನ್’ ಪುಸ್ತಕದಲ್ಲಿ ಓದಿದ ಕತೆಯಿದು. ಈ ಕತೆಯನ್ನು ಈ ಹಿಂದೆ ಬೇರೆಲ್ಲೋ ಓದಿದ್ದೆ. ಯಾವ ಕ್ಲಾಸ್ ಪಠ್ಯ ಪುಸ್ತಕದಲ್ಲಿ ಎನ್ನುವುದು ನೆನಪಿಲ್ಲ. ಈ ಪುಟ್ಟ ಕತೆಯು ದೊಡ್ಡದಾದ ವ್ಯಕ್ತಿತ್ವ ವಿಕಸನ ಪಾಠ ಹೊಂದಿದೆ. ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಡೇವಿಡ್ ಮತ್ತು ಗೋಲಿಯಾಥ್ ಒಂದು ಊರಿನಲ್ಲಿ ದೈತ್ಯನಿದ್ದ. ದೈತ್ಯನೆಂದರೆ ತುಂಬಾ ಬೃಹತ್ ಗಾತ್ರದ ಶಕ್ತಿಶಾಲಿ ವ್ಯಕ್ತಿ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಆ ಊರಿನವರು ಆತ ಕೊಡುವ ಹಿಂಸೆಯಿಂದ ತತ್ತರಿಸಿದ್ದರು. ಆತನಿಗೆ ಭಯಪಟ್ಟು ಬದುಕುತ್ತಿದ್ದರು. ಒಂದು ದಿನ… Read More »

Moral Story: ವಜ್ರ ಮತ್ತು ರೈತ

By | 01/12/2018

ಈ ಸ್ಫೂರ್ತಿದಾಯಕ ಕತೆಯ ತುಣುಕು ಇಂಟರ್ನೆಟ್ ನಲ್ಲಿ ದೊರಕಿತು. ಅದನ್ನು ಒಂದಿಷ್ಟು ವಿಸ್ತರಿಸಿ, ಹೊಸತನದಿಂದ ಇಲ್ಲಿ ಮರುರಚನೆ ಮಾಡಲಾಗಿದೆ. ಈ ಕತೆಯ ಹೆಸರು ವಜ್ರ ಮತ್ತು ರೈತ ಎಂದಿರಲಿ ಒಂದೂರಲ್ಲಿ ಒಬ್ಬ ರೈತನಿದ್ದ. ಆತ ಸಂತೃಪ್ತ. ಆತ ಸದಾ ನಗುನಗುತ್ತ ಕೆಲಸ ಮಾಡುತ್ತಿದ್ದ. ಹೊಲದಲ್ಲಿ ಕಷ್ಟಪಟ್ಟು ದುಡಿದರೂ ಆತ ದುಃಖಿತನಾಗಿರಲಿಲ್ಲ. ಒಂದು ದಿನ ವಿವೇಕಿಯೊಬ್ಬ ರೈತನಲ್ಲಿಗೆ ಬಂದ. ಆತ ಬಂದು ಜೋಳದ ರೊಟ್ಟಿ ತಿಂದು ಸಂತೃಪ್ತನಾದ. ಆತನು ಈ ರೈತನ ಗುಡಿಸಲು, ಅಲ್ಲಿನ ಬಡತನ ಗಮನಿಸಿದ. ಏನೋ ಮಾತನಾಡುತ್ತ ವಜ್ರದ ಕುರಿತು… Read More »

ಕನಕಮಜಲು: ಕರಾವಳಿಯಲ್ಲೊಂದು ಕಲಾಗ್ರಾಮ

By | 20/11/2018

ಕರಾವಳಿ ಸೇರಿದಂತೆ ಕರ್ನಾಟಕದಲ್ಲಿ ಗ್ರಾಮಕ್ಕೊಂದು ಯುವಕಮಂಡಲ-ಯುವತಿ ಮಂಡಲಗಳು ಸಾಮಾನ್ಯ. ಪ್ರತಿ ಯುವ ಸಂಘಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅಂತಹ ವ್ಯತ್ಯಾಸಗಳು ಇರುವುದಿಲ್ಲ. ಆಗಾಗ ಗ್ರಾಮೀಣ ನಾಟಕ, ಯಕ್ಷಗಾನ, ಹಾಡು ನೃತ್ಯ, ಒಂದಿಷ್ಟು ಗ್ರಾಮೀಣ ಕ್ರೀಡೆಗಳು, ಶ್ರಮದಾನ…. ಹೀಗೆ ಒಂದೇ ತೆರನಾದ ಚಟುವಟಿಕೆಗಳು. ನನ್ನ ಪಕ್ಕದೂರು ಕನಕಮಜಲು ಹಾಗಲ್ಲ. ನನ್ನ ಕಾಲೇಜು ದಿನಗಳಲ್ಲಿಯೇ ವಿನೂತನ ಕಾರ್ಯಕ್ರಮಗಳಿಂದ ಗಮನಸೆಳೆಯುತ್ತಿತ್ತು.ಊರು ಬಿಟ್ಟು ಬಂದು ಹತ್ತು ವರ್ಷ ಕಳೆದರೂ ಅಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಸುದ್ದಿ ಸುದ್ದಿಪತ್ರಿಕೆಗಳಮೂಲಕವೇ ನನಗೆ ತಲುಪುತ್ತಿದೆ. ಇತ್ತೀಚೆಗೆ ಅಲ್ಲಿ ಕಲಾ ಕಾರ್ಯಕ್ರಮವೊಂದು ನಡೆದಾಗ ಆ… Read More »

Moral Story: ಪರೀಕ್ಷೆ ತಪ್ಪಿಸಿದ ಹುಡುಗರು

By | 18/11/2018

ನಾಲ್ವರು ಕಾಲೇಜು ಹುಡುಗರಿದ್ದರು. ಅವರಿಗೆ ಮರುದಿನ ಪರೀಕ್ಷೆ ಇತ್ತು. ಆದರೆ, ಹಿಂದಿನ ದಿನ ಸ್ನೇಹಿತನ ಹುಟ್ಟುಹಬ್ಬವೆಂದು ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದರು. ಮರುದಿನ ಪರೀಕ್ಷೆಯ ವಿಷಯವೇ ಅವರಿಗೆ ಮರೆತು ಹೋಗಿತ್ತು. ಅವರು ಏನೂ ಅಧ್ಯಯನ ಮಾಡಿರಲಿಲ್ಲ. ಮರುದಿನ ಪರೀಕ್ಷೆ. ಈ ಪರೀಕ್ಷೆ ತಪ್ಪಿಸಲು ಏನಾದರೂ ಐಡಿಯಾ ಮಾಡಬೇಕು ಎಂದುಕೊಂಡರು. ನಾವು ನಿನ್ನೆ ರಾತ್ರಿ ಒಂದು ಮದುವೆಗೆ ಹೋಗಿದಾಗ ಒಂದು ಘಟನೆ ನಡೆಯಿತು.  ಬರುವಾಗ ಕಾರಿನ ಒಂದು ಟೈರ್ ಸ್ಪೋಟಗೊಂಡು ರಸ್ತೆಯಲ್ಲಿಯೇ ರಾತ್ರಿಯಿಡಿ ಕಳೆಯಬೇಕಾಯಿತು ಎಂಬ ಸುಳ್ಳನ್ನು ಪ್ರಾಂಶುಪಾಲರ ಬಳಿ ಹೇಳಿದರು. ಇವರ ಮಾತುಗಳನ್ನು… Read More »