Tag Archives: ಸ್ಫೂರ್ತಿದಾಯಕ ಕತೆ

ನೀತಿಕತೆ: ಬಾವಿಗೆ ಬಿದ್ದ ಕತ್ತೆ, ಎದ್ದುಬಂದ ಕತೆ

By | 22/10/2018

ಒಬ್ಬ ವ್ಯಕ್ತಿಯು ಕತ್ತೆಯೊಂದನ್ನು ಸಾಕಿದ್ದ. ಅದು ಅವನ ಪ್ರೀತಿಯ ಕತ್ತೆಯಾಗಿತ್ತು. ಒಂದು ದಿನ ದಾರಿಯಲ್ಲಿ ಬರುತ್ತಿರುವಾಗ ಆ ಕತ್ತೆ ಪುಟ್ಟ ಬಾವಿಯೊಂದಕ್ಕೆ ಬಿದ್ದುಬಿಟ್ಟಿತು. ಎಷ್ಟೇ ಕಷ್ಟಪಟ್ಟರೂ ಆ ಕತ್ತೆಯನ್ನು ಅಲ್ಲಿಂದ ಹೊರತೆಗೆಯುವ ದಾರಿ ಅವನಿಗೆ ಹೊಳೆಯಲಿಲ್ಲ. ಸುತ್ತಲೂ ಜನರು ಗುಂಪುಗೂಡಿದ್ದರು. ಇದನ್ನು ಇಲ್ಲೇ ಬಿಟ್ಟು ಹೋದರೆ ಪಾಪ ತುಂಬಾ ಕಷ್ಟಪಡುತ್ತದೆ. ಅದಕ್ಕಾಗಿ ಈ ಪುಟ್ಟ ಬಾವಿಗೆ ಮಣ್ಣು ತುಂಬಿ ಅದನ್ನು ಕೊಂದು ಬಿಡಿ ಎಂಬ ಅಭಿಪ್ರಾಯ ಬಂತು. ತನ್ನ ಪ್ರೀತಿಯ ಕತ್ತೆಯನ್ನು ಸಾಯಿಸಲು ಅವನಿಗೆ ಮನಸ್ಸು ಬರಲಿಲ್ಲ. ಆದರೆ, ಬಾವಿಯೊಳಗೆ ನರಳಿ… Read More »