Category Archives: ಪ್ರವಾಸ

ನಾಡಿನೆಲ್ಲೆಡೆ ನಾಡಹಬ್ಬದ ಸಂಭ್ರಮ, ಮೈಸೂರು ದಸರಾದ ಇತಿಹಾಸ ಗೊತ್ತೆ? ಎಲ್ಲರೂ ತಿಳಿದಿರಬೇಕಾದ ಅಮೂಲ್ಯ ಮಾಹಿತಿ ಇಲ್ಲಿದೆ..

By | 07/10/2021

ವಿಜಯನಗರ ದೊರೆಗಳು 15ನೇ ಶತಮಾನದಲ್ಲಿ ದಸರಾ ಉತ್ಸವ ಆರಂಭಿಸಿದರು.  ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಶ್ರೀರಂಗಪಟ್ಟಣದಲ್ಲಿಮೈಸೂರು ಮೂಲದ ದೊರೆ ರಾಜ ಒಡೆಯರ್‌ ಮಹಾನವಮಿ ಉತ್ಸವವನ್ನು ಪುರುಜ್ಜೀವನಗೊಳಿಸಿದರು. ಶ್ರೀರಂಗಪಟ್ಟಣದಲ್ಲಿವಿಜಯನಗರದ ಪ್ರತಿನಿಧಿಯಾಗಿದ್ದ ಶ್ರೀರಂಗರಾಯನನ್ನು ನಿಗ್ರಹಿಸಿ, ಮೈಸೂರು ಸೀಮೆಯ ದೊರೆಯಾದ ರಾಜ ಒಡೆಯರ್‌ ತನ್ನ ಶಕ್ತಿ ಸಾಮರ್ಥ್ಯ‌ದಿಂದ ಭದ್ರಬುನಾದಿ ಹಾಕಿದನಲ್ಲದೆ 1610ರಿಂದ ಮಹಾನವಮಿ ಹಬ್ಬದ ಪರಂಪರೆಯನ್ನು  ಮುಂದುವರಿಸಿದರು. ವಿಜಯನಗರ ಕಾಲದಲ್ಲಿ ಕ್ರಿ.ಶ. 1336ರಿಂದ 1565ರವರೆಗೆ ವಿಜಯನಗರ ಹಿಂದೂ ಸಾಮ್ರಾಜ್ಯ ಭಾರತದ ಇತಿಹಾಸದಲ್ಲೊಂದು ಪ್ರಮುಖ ಘಟ್ಟ. ವಿಜಯನಗರದ ಅರಸರಿಗೆ ರಾಜ್ಯ ವಿಸ್ತರಣೆಯ ಜೊತೆಗೆ ಬಿಜಾಪುರದ ಆದಿಲ್‌ಷಾಹಿ ಮೊದಲಾದ… Read More »