Category Archives: Articles

ನಿಮ್ಮ ಉದ್ಯೋಗ ಉಳಿಯಬೇಕೆ, ಯಶಸ್ಸು ಪಡೆಯಬೇಕೆ? ಇಂತಹ ಬುದ್ಧಿಗಳನ್ನು ಬಿಟ್ಟುಬಿಡಿ!

By | 27/12/2021

ಸೆಂಟರ್ ಫಾರ್ ಕ್ರಿಯೆಟಿವ್ ಲೀಡರ್ಷಿಪ್‌ ಸಂಸ್ಥೆಯು ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಕಂಪನಿಯೊಂದಕ್ಕೆ ಯಾರು ಸಮಸ್ಯಾತ್ಮಕ ಉದ್ಯೋಗಿಯಾಗಬಲ್ಲರು ಎಂಬ ಮಾಹಿತಿ ಒದಗಿಸಿದೆ. ನಿಮ್ಮಲ್ಲಿ ಸಮಸ್ಯಾತ್ಮಕ ಉದ್ಯೋಗಿಯಾಗುವ ಲಕ್ಷಣಗಳಿದ್ದರೆ ತಕ್ಷಣದಿಂದ ಆ ಗುಣಗಳನ್ನು ಬಿಟ್ಟುಬಿಡಲು ಪ್ರಯತ್ನಿಸಿ. 1.ಕೆಲಸದ ಕಾರ್ಯಕ್ಷಮತೆ ಉತ್ತಮವಾಗಿರದೆ ಇರುವುದು ನಿರ್ದಿಷ್ಟ ಕಾರ್ಯದಕ್ಷತೆ ಹೊಂದಿರದೆ ಇರುವುದು ಕಂಪನಿಗೆ ಹೊರೆಯಾಗಿ ಪರಿಣಮಿಸುತ್ತದೆ. ಪ್ರತಿಯೊಂದು ಕಂಪನಿಗಳಲ್ಲಿಯೂ ಅಂಡರ್‍ಪರ್ಫಾಮಿಂಗ್ ಉದ್ಯೋಗಿಗಳು ಇದ್ದೇ ಇರುತ್ತಾರೆ. ಇಂತವರು ತಮ್ಮ ಪರ್ಫಾಮೆನ್ಸ್ ಉತ್ತಮಪಡಿಸಿಕೊಳ್ಳಲು ಆದ್ಯತೆ ನೀಡಬೇಕು. ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸಲಾಗಿಲ್ಲವೆಂಬ ಸಬೂಬು ಹೇಳುವುದನ್ನು ಬಿಡಬೇಕು. 2. ಇತರರೊಂದಿಗೆ ಉತ್ತಮವಾಗಿ ಕೆಲಸ ಮಾಡದೆ… Read More »

ಉದ್ಯೋಗದಲ್ಲಿ ಯಶಸ್ಸು ಪಡೆಯಬೇಕೆ? ಸ್ವಾಮಿ ವಿವೇಕಾನಂದರು ಹೇಳಿದ ಈ ಹಿತವಚನಗಳನ್ನು ಪಾಲಿಸಿ

By | 25/12/2021

ಸ್ವಾಮಿ ವಿವೇಕಾನಂದರು ವಿವಿಧ ಸಂದರ್ಭಗಳಲ್ಲಿ ಹೇಳಿರುವ ನುಡಿಮುತ್ತುಗಳು, ಅವರು ಅನುಸರಿಸಿದ ಹಾದಿಗಳು ಕರಿಯರ್ ಯಶಸ್ಸು ಪಡೆಯಲು ಬಯಸುವವರಿಗೆ ಸೂರ್ತಿದಾಯಕ ಪಾಠವಾಗಬಹುದು. ಸ್ವಾಮಿ ವಿವೇಕಾನಂದರು ಜನಿಸಿದ್ದು 1863ರಲ್ಲಿ. ಆ ಕಾಲದಲ್ಲಿ ಜಗತ್ತು ಈಗಿನಂತೆ ಇರಲಿಲ್ಲ. ಮೊಬೈಲ್ ಇರಲಿಲ್ಲ. ಇಂಟರ್‍ನೆಟ್ ಇರಲಿಲ್ಲ. ಸೀಮಿತ ತಂತ್ರಜ್ಞಾನಗಳು ಇದ್ದವು. ಆದರೆ, ಅವರ ಬೋಧನೆಗಳು, ಅವರ ವ್ಯಕ್ತಿತ್ವ ಆ ಕಾಲದಲ್ಲಿಯೇ ಜಗತ್‍ಖ್ಯಾತಿ ಪಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು, ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರು, ಸ್ವಂತ ಉದ್ದಿಮೆ ಕಟ್ಟಲು ಪ್ರಯತ್ನಿಸುತ್ತಿರುವ ತರುಣ, ತರುಣಿಯರು, ಕರಿಯರ್‍ನಲ್ಲಿ ಪ್ರಗತಿ ಕಾಣಲು ಬಯಸುವವರಿಗೆ ವಿವೇಕವಾಣಿಯು… Read More »

ಉದ್ಯೊಗದಲ್ಲಿ ಪ್ರೊಬೆಷನರಿ ಅವಧಿ ಎಂದರೇನು? ಈ ಅವಧಿಯಲ್ಲಿ ನಿಮ್ಮ ಕೆಲಸ ಹೇಗಿರಬೇಕು?

By | 23/12/2021

ಏನಿದು ಪ್ರೊಬೆಷನರಿ ಪಿರೆಯಿಡ್‌? ಈ ಅವಧಿಯಲ್ಲಿಹೇಗೆ ಕೆಲಸ ಮಾಡಬೇಕು? ಇದು ಯಾಕೆ ಮುಖ್ಯ? ಹೊಸದಾಗಿ ಕೆಲಸಕ್ಕೆ ಸೇರುವವರು ಈ ಅವಧಿಯಲ್ಲಿಹೇಗಿರಬೇಕು ಮತ್ತು ಹೇಗಿರಬಾರದು? ಇದು ಕರ್ನಾಟಕ ಬೆಸ್ಟ್‌ ವಿಶೇಷ. ಹೊಸ ಕಂಪನಿಗೆ ಸೇರುವುದು ಫ್ರೆಷರ್ಸ್‌ಗಳಿಗೆ ಮಾತ್ರವಲ್ಲದೆ ಅನುಭವಿಗಳಿಗೂ ಆತಂಕ ತರುವ ಸಂಗತಿ. ಕಂಪನಿಗಳು ಸಹ ಫ್ರೆಷರ್‌ ಆಗಿರಲಿ, ಹತ್ತಿಪತ್ತು ವರ್ಷ ಅನುಭವಿಯಾಗಿರಲಿ, ಮೊದಲ ಆರು ತಿಂಗಳು ‘ಪ್ರೊಬೆಷನರಿ ಅವಧಿ’ ಎಂಬ ಅನಿವಾರ‍್ಯ ಆಯ್ಕೆಯನ್ನು ಮುಂದಿಡುತ್ತದೆ.  ಆದರೆ, ಕಂಪನಿಗೂ, ಉದ್ಯೋಗಕ್ಕೆ ಸೇರುವವರಿಗೂ ಪ್ರೊಬೆಷನರಿ ಅವಧಿ ಎನ್ನುವುದು ಅತ್ಯುತ್ತಮ ಸಂಗತಿಯಾಗಿದೆ. ಕಂಪನಿಗೆ ನೀವು ಇಷ್ಟವಾಗದೆ… Read More »

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು? ಇಲ್ಲಿದೆ ಕಂಪ್ಲಿಟ್‌ ಗೈಡ್

By | 18/12/2021

ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದರೆ ಯಶಸ್ಸು ಕೈಗೆಟುಕದಷ್ಟು ದೂರದಲ್ಲಿರುತ್ತದೆ. ಪ್ರತಿವರ್ಷ ರೈಲ್ವೆ, ಬ್ಯಾಂಕ್, ಕೆಪಿಎಸ್‍ಸಿ, ಯುಪಿಎಸ್‍ಸಿ, ಪಿಡಿಒ, ಪೊಲೀಸ್ ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು `ಸರಕಾರಿ ಜಾಬ್ಸ್ ಸಿಗುವುದು ಸುಲಭವಲ್ಲ’ ಎಂದುಕೊಳ್ಳುತ್ತಾರೆ. ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್ ನೋಟಿಫಿಕೇಷನ್ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ… Read More »

ಕರಿಯರ್ ಪ್ರಗತಿಗೆ ನೆರವಾಗುವ ಸೋಷಿಯಲ್ ಸ್ಕಿಲ್ಸ್

By | 18/12/2021

ವೃತ್ತಿ ಮತ್ತು ವೈಯಕ್ತಿಕ ಜೀವನದ ಯಶಸ್ಸಿಗೆ ಅವಶ್ಯವಾಗಿ ಬೇಕಾದ ಕೌಶಲಗಳ ವಿವರ ಇಲ್ಲಿದೆ. ಕರಿಯರ್‍ನಲ್ಲಿ ಪ್ರಗತಿ ಕಾಣಲು ಕೇವಲ ಬಾಹ್ಯ ಅಂದ ಸಾಕಾಗದು. ಯಶಸ್ಸಿಗೆ ಸೋಷಿಯಲ್ ಸ್ಕಿಲ್ಸ್ ಅವಶ್ಯವಾಗಿದೆ. ಬಾಹ್ಯ ಅಂದವೆಂದರೆ ಶೋಕೇಸ್‍ನಲ್ಲಿರುವ ಗೊಂಬೆ, ಸೋಷಿಯಲ್ ಕೌಶಲವೆನ್ನುವುದು ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಪುಟ್ಟ ಮಗು. ನಿಮ್ಮ ಬಗ್ಗೆ ನಿಮಗಿರುವ ಸ್ವಯಂ `Àರವಸೆ, ಸಕಾರಾತ್ಮಕ ವರ್ತನೆ, ಉತ್ತಮ ಬಾಡಿ ಲ್ಯಾಂಗ್ವ ಏಜ್, ಐ ಕಾಂಟ್ಯಾಕ್ಟ್, ಅತ್ಯುತ್ತಮ ಸಂವಹನ ಕೌಶಲ ಇತ್ಯಾದಿಗಳು ಕರಿಯರ್ ಪ್ರಗತಿಗೆ ಸಾಥ್ ನೀಡುತ್ತವೆ. ಜನರೊಂದಿಗೆ ಬೆರೆಯಿರಿ ಸೋಷಿಯಲ್ ಕೌಶಲಗಳು ಮಾತ್ರವಲ್ಲದೆ,… Read More »

2022 Career Resolutions: ವೃತ್ತಿ ಜೀವನದ ಯಶಸ್ಸಿಗೆ ಈ ನಿಯಮಗಳನ್ನು ಪಾಲಿಸಿ

By | 15/12/2021

ಉದ್ಯೋಗಕ್ಷೇತ್ರದಲ್ಲಿಪ್ರಗತಿ ಕಾಣಲು ಬಯಸುವವರಿಗೆ ತಜ್ಞರು ಒಂದಿಷ್ಟು ಕಿವಿಮಾತುಗಳನ್ನು ಇಲ್ಲಿಹೇಳಿದ್ದಾರೆ. ಹೊಸ ವರ್ಷದ ಆರಂಭದಲ್ಲಿಕರಿಯರ್‌ನಲ್ಲಿಪ್ರಗತಿ ಕಾಣಲು ಪ್ರಯತ್ನಿಸಬೇಕು ಎಂಬ ಸಂಕಲ್ಪ ಬಹುತೇಕರು ಮಾಡಿಕೊಂಡಿರುತ್ತಾರೆ. ಉದ್ಯೋಗದಲ್ಲಿಪ್ರಗತಿ ಕಾಣುವ ಕುರಿತು ನೀವು ತಜ್ಞರಿಂದ, ಈಗಾಗಲೇ ಉದ್ಯೋಗದಲ್ಲಿಉನ್ನತ ಹಂತದಲ್ಲಿರುವವರಿಂದ, ಸಮಲೋಚಕರಿಂದ ಟಿಫ್ಸ್‌ ಪಡೆದಿರಬಹುದು. ಕರಿಯರ್‌ನಲ್ಲಿಸಾಧನೆ ಮಾಡಿರುವವರ ಅನುಭವಗಳನ್ನು ಕೇಳುವುದು ತುಂಬಾ ಒಳ್ಳೆಯ ಕೆಲಸ. ಅವರ ಅನುಭವ, ಆಲೋಚನೆಗಳು ಅತ್ಯುನ್ನತವಾಗಿರುತ್ತವೆ. ಇಂತಹ ಅನುಭವಿ ಸಾಧಕರು ಬಿಸ್ನೆಸ್‌ ಇನ್‌ಸೈಡರ್‌ಗೆ ನೀಡಿದ ಸಂದರ್ಶನದಲ್ಲಿಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿಆಯ್ದ ಕೆಲವು ಟಿಪ್ಸ್‌ ಗಳು ಇಲ್ಲಿವೆ. 2022 Career Resolutions: ನೆಟ್‌ವರ್ಕಿಂಗ್‌ ಅಗತ್ಯ… Read More »