ಎಂಜನಿಯರಿಂಗ್ ಕೋರ್ಸ್ ಕನ್ನಡದಲ್ಲಿ: ಸ್ವಾಗತ

By | 14/06/2021

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಎಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡದಲ್ಲಿ ನೀಡಲು ಮುಂದಾಗಿರುವ ನಿರ್ಧಾರವನ್ನು ಕರ್ನಾಟಕ ವಿಕಾಸ ರಂಗ ಸ್ವಾಗತಿಸಿದೆ.

ಕನ್ನಡ ಮಾಧ್ಯಮದಲ್ಲಿ ಎಂಜನಿಯರಿಂಗ್ ಶಿಕ್ಷಣವನ್ನು ನೀಡುತ್ತಿರುವುದು ಕನ್ನಡಿಗರೆಲ್ಲರಿಗೂ ಖುಷಿಯ ವಿಚಾರ ಎಂದು ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಹೇಳಿದ್ದಾರೆ.

ವಿವಿಯ ಈ ನಿರ್ಧಾರ ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸುವಂತಹ್ಹದ್ದಾಗಿದೆ ಎಂದರು. ರಾಷ್ಟ್ರ ಕವಿ ಕುವೆಂಪು ಅವರ ಕನಸು ನನಸಾಯಿತು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳ ಪರವಾಗಿರುವ ಅಂಶಗಳನ್ನು ರಾಜ್ಯ ಸರಕಾರ ತನ್ನ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *