ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಎಡೆಯೂರು : ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By | 17/09/2021

ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಎಡೆಯೂರು, ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಇಲ್ಲಿ ಕ್ಷೇತ್ರದ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುವ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ, ವೇದ, ಜ್ಯೋತಿಷ್ಯ ಮತ್ತು ‌ವೀರಶೈವಗಾಮ ಶಾಲೆ ಪಾಠಶಾಲೆ ಎಡೆಯೂರು ಇಲ್ಲಿ ಖಾಲಿ ಇರುವ 02 ತಾತ್ಕಾಲಿಕ ಹುದ್ದೆ ನೇಮಕಾತಿ ಬಗ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು : ವೇದ ಶಿಕ್ಷಕರು, ಸಂಸ್ಕೃತ ಸಾಹಿತ್ಯ ಶಿಕ್ಷಕರು

ವಯೋಮಿತಿ : 18 ವರ್ಷ ಮೇಲ್ಪಟ್ಟು, 40 ವರ್ಷ ದಾಟಿರಬಾರದು.

ಮೇಲ್ಕಂಡ ಎರಡು ಹುದ್ದೆಗಳು ತಾತ್ಕಾಲಿಕ ಹುದ್ದೆಗಳಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಕೈ ಬರಹದ ಅರ್ಜಿಯನ್ನು ದೃಢೀಕೃತ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಜಾಹಿರಾತು ಪ್ರಕಟಗೊಂಡ 15 ದಿವಸದೊಳಗೆ ಮುದ್ದಾಂ ಅಥವಾ ನೋಂದಣಿ ಅಂಚೆ ಮೂಲಕ ಸಲ್ಲಿಸುವುದು. ಹೆಚ್ಚಿನ ವಿಷಯಗಳಿಗೆ ಕಚೇರಿಯನ್ನು ಸಂಪರ್ಕಿಸುವುದು.

Leave a Reply

Your email address will not be published. Required fields are marked *